NAGARAJ BHAT

OM SHANTI 🙏
Shree M. Vijayraj Adhikari, Maara Gutthu - Venur
ಮಾರ ಗುತ್ತಿನ ಗಡಿ ಪ್ರಧಾನರಾದ ಶ್ರೀ ವಿಜಯರಾಜ್ ಅಧಿಕಾರಿಯವರು ಬೆಳ್ತಂಗಡಿ ತಾಲೂಕು ವೇಣೂರಿನ ಶ್ರೀಕ್ಷೇತ್ರ ಮುದ್ದಾಡಿ ದೈವಸ್ಥಾನದ ಆಡಳಿತ ಮೊಕ್ತೇಸರರು. ನಿವೃತ್ತ ಉಪನ್ಯಾಸಕರಾದ ಅಧಿಕಾರಿಯವರು ಆಗಸ್ಟ್ 16ರಂದು ಸಂಜೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇವರು ಪತ್ನಿ ಮತ್ತು ಮೂವರು ಪುತ್ರಿಯರನ್ನು ಸಹಿತ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.
ವೇಣೂರು ಶ್ರೀ ಜೈನ ದಿಗಂಬರ ತೀರ್ಥಕ್ಷೇತ್ರ ಸಮಿತಿಯ ಮಾಜಿ ಕಾರ್ಯದರ್ಶಿಗಳು, ವಿವೇಕಾನಂದ ಸೇವಾ ಟ್ರಸ್ಟ್ ನ ಸ್ಥಾಪಾಕಾಧ್ಯಕ್ಷರೂ ಆದ ಇವರು ಪ್ರಗತಿಪರ ಕೃಷಿಕರು, ಧಾರ್ಮಿಕ, ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.
ಸನಾತನ ಧರ್ಮದ ಶ್ರೇಷ್ಠ ಗ್ರಂಥವಾದ ಭಗವದ್ಗೀತೆಯ ಅಪ್ಪಟ ಅಭಿಮಾನಿಯಾಗಿದ್ದ ಇವರು, ಪರಮಾತ್ಮ ಶ್ರೀಕೃಷ್ಣನಲ್ಲಿ ಮತ್ತು ತನ್ನ ಗುತ್ತಿನ‌ ಪ್ರಧಾನ ದೈವ ಮಾರವಂಡಿಯಲ್ಲಿ ಯಾವತ್ತೂ ಭೇದವನ್ನು ಕಾಣದೇ ಎರಡೂ ಶಕ್ತಿಗಳು ಒಂದೇ ಎಂದು ದೃಢವಾಗಿ ನಂಬಿದ್ದರು. ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಪ್ರಾರ್ಥನೆ.. 🙏
ಅನನ್ಯಶ್ಚಿಂತಯಂತೋ ಮಾಂ ಯೇ ಜನ: ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ || 22||
(ಭಗವದ್ಗೀತೆ: ಅಧ್ಯಾಯ 9, ಶ್ಲೋಕ 22)
ಯಾವಾಗಲೂ ನನ್ನ ಬಗ್ಗೆ ಯೋಚಿಸುವವರು ಮತ್ತು ನನ್ನ ಬಗ್ಗೆ ವಿಶೇಷವಾದ ಭಕ್ತಿಯಲ್ಲಿ ತೊಡಗುವವರು ಇದ್ದಾರೆ. ಅವರ ಮನಸ್ಸು ಯಾವಾಗಲೂ ನನ್ನಲ್ಲಿ ಲೀನವಾಗಿರುವ ಅವರಿಗೆ, ನಾನು ಅವರ ಕೊರತೆಯನ್ನು ಒದಗಿಸುತ್ತೇನೆ ಮತ್ತು ಅವರು ಈಗಾಗಲೇ ಹೊಂದಿರುವುದನ್ನು ಸಂರಕ್ಷಿಸುತ್ತೇನೆ.
ಹರೇ ಕೃಷ್ಣ 🙏

2 months ago (edited) | [YT] | 75