Kalashree Dr Jayashree Aravind

ಗಾಯನ, ಸಂಗೀತ ಸಂಯೋಜನೆ ಮತ್ತು ಕನ್ನಡದ ಸುಗಮಸಂಗೀತದ ಬರಹಗಳಿಗೆ ಹೆಸರಾಗಿರುವವರು ಜಯಶ್ರೀ ಅರವಿಂದ್. ಜಯಶ್ರೀಯವರ ಸಂಯೋಜನೆಯ ಗೀತೆಗಳಿಗೆ ರಾಜ್ ಕುಮಾರ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಪಿ.ಸುಶೀಲಾ, ವಾಣಿ ಜಯರಾಂ, ಜೇಸುದಾಸ್, ಸಿ.ಅಶ್ವತ್ಥ್, ರತ್ನಮಾಲ ಪ್ರಕಾಶ್, ನರಸಿಂಹನಾಯಕ್ ಮುಂತಾದ ಸಕಲಗಣ್ಯರು ಧ್ವನಿ ನೀಡಿದ್ದಾರೆ. ಚಲನಚಿತ್ರರಂಗದ ಭೀಷ್ಮ ಜಿ.ವಿ.ಅಯ್ಯರ್ ತಯಾರಿಸಿದ ‘ಕೃಷ್ಣಲೀಲಾ’ ಚಿತ್ರದ ಸಂಗೀತ ನಿರ್ದೇಶಕಿ ಕೂಡ ಜಯಶ್ರೀ ಅರವಿಂದ್. ಯುವಕಲಾವಿದರಾಗಿ ಹೆಸರು ಮಾಡಿರುವ ರಮೇಶ್ ಚಂದ್ರ, ಶ್ರೀರಕ್ಷಾ ಪ್ರಿಯರಾಮ್, ಕೆ.ಎಸ್.ಸುರೇಖಾ ಮುಂತಾದವರು ಜಯಶ್ರೀಯವರ ಗರಡಿಯಲ್ಲಿ ಬೆಳೆದು ಬಂದವರು.